ದ ಪಾಲಿಟಿಕ್

ಕುಮಾರಸ್ವಾಮಿ ಆರೆಸ್ಸೆಸ್ ವಿರುದ್ಧ ಒಂದೇ ಸಮನೆ ದಾಳಿ ಮಾಡುತ್ತಿರುವುದೇಕೆ ?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏಕಾಏಕಿ ಸಂಘಪರಿವಾರದ ವಿರುದ್ಧ ಉಗ್ರವಾಗಿ ಮುಗಿಬಿಳುತ್ತಿರುವುದು ಬಹುತೇಕರಿಗೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ದೇಶದಾದ್ಯಂತ ಆರೆಸ್ಸೆಸ್ ವಿರುದ್ಧ ಬಹಿರಂಗವಾಗಿ ಚರ್ಚೆ, ಟೀಕೆ ಶುರುವಾಗಿದ್ದು ಒಂದು ಸಮಾಧಾನಕರ ಸಂಗತಿಯಾಗಿದೆ. ಅದರ ಭಾಗವಾಗಿಯೇ ಕುಮಾರಸ್ವಾಮಿ ಮಾತಾಡುತ್ತಿದ್ದಾರೆಯೇ? ಉಹೂಂ, ಇಲ್ಲವೇ ಇಲ್ಲ. ಒಂದು ಹಿಡನ್ ಅಜೆಂಡಾ ಇಟ್ಟುಕೊಳ್ಳದೆ,ಈ ರೀತಿಯಾಗಿ ಮುಗಿಬಿಳುವ ಆಸಾಮಿ ಅವರಂತು ಖಂಡಿತಾ ಅಲ್ಲ.ಅವರ ರಾಜಕೀಯ ಹೆಜ್ಜೆ ಗುರುತುಗಳೆ ಇದಕ್ಕೆ ಸಾಕ್ಷಿ ಎಂಬಂತೆ ಇವೆ. ಮೊನ್ನೆ ಆರೆಸ್ಸೆಸ್ ಬಗ್ಗೆ ದಿನೇಶ್ ನಾರಾಯಣ ಅವರು ಬರೆದಿರುವ ‘ದಿ ಆರೆಸ್ಸೆಸ್: […]

ಬಿ.ಜೆ.ಪಿ. ಲಿಂಗಾಯತ ತುಷ್ಟೀಕರಣ ಮಾಡುತ್ತಿದೆಯೇ?

“ಬರಲಿರುವ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ. ಸಂಪೂರ್ಣ ಬಹುಮತ ಸಿಗುತ್ತದೆ. ಆಗ ಜಾತಿ ವಿಚಾರ ಬರುವುದಿಲ್ಲ. ಮುಂದಿನ ಬಾರಿ ಬಿ.ಜೆ.ಪಿ.ಯಿಂದ ರಾಷ್ಟ್ರವಾದಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ” ಎಂದಿದ್ದಾರೆ ಕೆ.ಎಸ್.ಈಶ್ವರಪ್ಪ. (ಪ್ರ.ವಾ. ಆ.6 ಪು.8)ಈ ಮಾತುಗಳ ಅರ್ಥ ಸ್ಪಷ್ಟವಾಗಿದೆ. ಅಂದರೆ ಬಿ.ಜೆ.ಪಿ.ಗೆ ಸಂಪೂರ್ಣ ಬಹುಮತ ಸಿಗದಿದ್ದಾಗ ಮಾತ್ರ ಅಧಿಕಾರ ದಕ್ಕಿಸಿಕೊಳ್ಳಲು ಜಾತಿಗಳನ್ನು ಓಲೈಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಈಬಾರಿ ಲಿಂಗಾಯತ ತುಷ್ಠೀಕರಣ ಮಾಡಿರುವುದು  ಅಸಾಧ್ಯ ಸಂದರ್ಭದಲ್ಲಿ, ಅಧಿಕಾರ ಸಾಧ್ಯಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಿರುವ ತಂತ್ರವಷ್ಟೆ, ಎಂಬುದನ್ನು ಸೂಚಿಸುತ್ತಿವೆ.  ಇನ್ನೂ ಮುಖ್ಯವಾಗಿ, ಇಂತಹ ಈಗಿನ ಬಿಕ್ಕಟ್ಟಿನ ಕಾಲದಲ್ಲಿ ಪಕ್ಷದ […]